ಕವಿತೆಯೆಂದರೆ
ರಚನೆ : ಸುರೇಶ ತಂಗೋಡ
----------------------------------
ಕವಿತೆಯೆಂದರೆ..... ಮನದ ಭಾವಗಳೆಲ್ಲವನ್ನು ಅಕ್ಷರಕ್ಕಿಳಿಸುವ ಸಾಹಸ, ಹರೆಯದ ತವಕ-ತಲ್ಲಣಗಳನ್ನು ವ್ಯವಸ್ಥಿವಾಗಿಡುವ ಖಜಾನೆ, ಬೆಂದ ಬದುಕಿನ ಅನಾವರಣದ ಮಾರ್ಗ. ಸಮಾಜದ ಅಂಕು -ಡೊಂಕು ತಿದ್ದುವ ಸಮಾಜದ ಮೇಷ್ಟ್ರು. ನಿತ್ಯ ಹರಿದ್ವರ್ಣ ವನಸಿರಿಯ ಪ್ರಕೃತಿ ಪ್ರೀತಿಯದು. ಅದು ಕಾಲ,ಭಾಷೆ,ಜಾತಿ ಸಮಾಜಗಳೆಲ್ಲವ ಮೀರಿದ್ದು . ಕವಿತೆಯೆಂದರೆ ಅನಂತ ,ಅಮರವಾದದ್ದು ಚಿರನೂತನವಾಗಿ ಸಾಗುವಂತಹದು.
----------------------------------
ನೋಂದಣಿ ಐಡಿ : KPF-S1-5009